ಕೆಲಸಕ್ಕೆ ಹೋಗದೆ ಟಿವಿ ನೋಡ್ತೀಯಾ ಎಂದು ಪೋಷಕರು ಬೈದು ಬುದ್ದಿ ಹೇಳಿದ್ದಕ್ಕೆ ಮಗ ಆತ್ಮಹತ್ಯೆ | ಜನತಾ ನ್ಯೂಸ್
ಬೆಂಗಳೂರು : ಮಗನಿಗೆ ಕೆಲಸಕ್ಕೆ ಹೋಗುವಂತೆ ಪೋಷಕರು ಬೈದು ಬುದ್ದಿ ಹೇಳಿದಕ್ಕೆ ಕೋಪಗೊಂಡ ಆತ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಗಜೀವನ್ ರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೈಯ್ಯದ್ ಸಾಹೀಲ್ (23) ಎಂಬ ಯುವಕ ಮೃತ ದುರ್ದೈವಿ. ಗುಜರಿ ಕೆಲಸಕ್ಕಾಗಿ ಹೋಗುತ್ತಿದ್ದ ಸೈಯದ್ ದುಶ್ಚಟ್ಟಕ್ಕೆ ಒಳಗಾಗಿ ಏರಿಯಾ ಹುಡುಗರೊಂದಿಗೆ ಸೇರಿಕೊಂಡು ಓಡಾಡಿಕೊಂಡಿದ್ದ. ಮಗನ ನಡವಳಿಕೆ ಕಂಡು ಹಲವು ಬಾರಿ ಪೋಷಕರು ತಿಳಿವಳಿಕೆ ಹೇಳಿದ್ದರು.
ಇಷ್ಟಾದರೂ ಮಾತು ಕೇಳದ ಆತ ನಿನ್ನೆ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕುಳಿತಿರುವಾಗ, ಸೈಯ್ಯದ್ಗೆ ತಂದೆ ಕೆಲಸಕ್ಕೆ ಹೋಗದೆ ಟಿವಿ ನೋಡಿ ಕಾಲ ಕಳೀತೀಯಾ ಎಂದು ಬೈದಿದ್ದರು. ಇದರಿಂದ ಕೋಪಗೊಂಡ ಮಗ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಜೆಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.